ಈ ವೈಯಕ್ತಿಕತೆಯೊಳಗಿಂದ ಜಾರಿ
ನಿರಾತ್ಮಕನಾಗಿ
ಜಾಗತಿಕ ಸಂವೇದನೆಯಲ್ಲಿ ಸೇರಿ
ಸ್ಪಂದಿಸಬೇಕೆಂದು ಬಯಸಿ ಬಂದಿದ್ದೇನೆ
ಯಾರದೋ ಕೊರಳಿಗೆ ಜೋತು
ಓ! ನಾನೆ ನೀನಾಗಬೇಕು
ನಾನಿಲ್ಲದಿರಬೇಕು
ಎಂದು ತಡಬಡಿಸಿದ್ದೇನೆ
ಯಾರದೋ ಎದೆ ನಡುವೆ ತಲೆಯಿರಿಸಿ
ನಿನ್ನಲ್ಲಿ ನಾನಾಗಬೇಕು
ನನ್ನ ನೀ ಕೊಲಬೇಕು
ಕೊಲ್ಲು ಕೊಲ್ಲೆಂದು
ಸಣ್ಣ ಮಗುವಿನ ಹಾಗೆ
ಹಟ ಹಿಡಿದಿದ್ದೇನೆ
ಆದರೂ
ಮತ್ತೆ ಹಾಸಿಗೆಯಲ್ಲಿ
ಹೊರಳಿ ಮುಸುಕೆಳೆದಾಗ
ನಾನೊಬ್ಬ
ಒಬ್ಬನೇ ಒಬ್ಬ.
ನನ್ನ ನರಚಾಚಿ ನಾನೆ ನನ್ನಿಂದ ಮೆಲ್ಲನೆ ಹೊರ
ಜಾರಬೇಕೆಂದಾಗ
ಯಾರೊ ಚುಚ್ಚಿದ ನೋವು ತಾಳಲಾರದೆ
ಮತ್ತೆ ಎಳೆದುಕೊಳ್ಳುತ್ತೇನೆ
ನನ್ನ ಚಿಪ್ಪಿನ ಒಳಗೆ
ಬಂಡೆಗಲ್ಲೆತ್ತಿ ಹಾಕಿದರು ಒಡೆಯದಂಥ ಈ
ಚಿಪ್ಪಿಗೂಡು ಹೊತ್ತು ತಿರುಗಲೇಬೇಕು
ಡುಬ್ಬದ ಹಾಗೆ ನನ್ನ ಮೇಲೆ!
ಇದೆಂಥ ಶಾಪ!
*****
Related Post
ಸಣ್ಣ ಕತೆ
-
ಸಾವಿಗೊಂದು ಸ್ಮಾರಕ
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
-
ನಂಟಿನ ಕೊನೆಯ ಬಲ್ಲವರಾರು?
ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…
-
ಕೊಳಲು ಉಳಿದಿದೆ
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
-
ಗ್ರಹಕಥಾ
[ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…